ಬೇಸಿಗೆ

ಕಡುಬಿಸಿಲ ಬೇಸಿಗೆಯ ರೌದ್ರರೂಪದ ಯುರಿಯು
ಝಳವಾಗಿ ಜುಳು ಜುಳನೆ ಇಳಿಯುತಿದೆ
ಜಲಧರನ ರಾಜ್ಯದಾಚೆಯಾ ಗಡಿಯ ರವಿಯು
ಸುರಿಸುವದೊ? ರಸವಲ್ಲ! ಬಿಸಿಲು ಉಸಿರಾಗಿದೆ

ಕೆಂಡದಾ ಹೂವೊಂದು ಟೊಂಗೆ ಗಿಡವಿಲ್ಲದೆಯೇ
ಅರಳಿಹುದು; ತಾಪದಾ ಪರಿಮಳವ ಸುರಿಸಿಹುದು
ತನ್ನ ಬಣ್ಣವ ನೋಡಬಂದಿಹ ಜಗದ ಕಣ್ಣು ನೋಡದೆಯೆ
ಹೊರಳಿಹುದು; ಅನಿತೊಂದು ಆಟೋಪ ಬೀರಿಹುದು

ಮೋಡ ಮಾತೆಯರೆಲ್ಲ ಕಿರಿಯ ಕೂಸುಗಳೊಡನೆ
ಓಟಕಿತ್ತಿಹರು ಕ್ಷಿತಿಜದಾಚೆಯಾ ಗಿರಿಗೆ
ನೆರಳಿಲ್ಲ, ನೆಲವಿಲ್ಲ. ಬಳಲುತೆ, ಪೊರೆವರನರಸುತೆ
ತಾವೇ ನೆರಳನಿತ್ತಿಹರು, ಬಸವಳಿಪ ಭೂದೇವಿಗೆ

ನೆಲ-ಕಲ್ಲು ಕಾದಿಹವು, ಗಿಡ-ಬಳ್ಳಿ ಬಾಯ್ಬಿಡುತಿಹವು
ಊರು-ದಾರಿಗಳೆಲ್ಲ ತಲೆತಿರುಗಿ ಬಿದ್ದಿಹವು
ಅರಿವಿಲ್ಲದಂತಿಹವು ಹಿರಿಕಿರಿಯ ಗಿರಿಗಳೆಲ್ಲವು
ನಲಿದು ನರ್ತಿಸಿದ ಭಂಗಗಳು ಮರೆಯರಸಿಹವು

ನಗೆ‌ಇಲ್ಲ, ನಲವಿಲ್ಲ ಉಲಿವಿಲ್ಲ, ಮೌನ ತುಂಬಿದೆ
ಅನ್ನ-ನೀರನು ಹಸಿದೊಡಲು ಹುಡುಕುತಿದೆ
ರಸಿಕ ರಸ ಸೃಷ್ಟಿ ಹರುಷ ಸುಖವೆಲ್ಲ ಆಳಿದಿದೆ
ಬಿಸಿಲ ಬೇಗೆಯ ನಾಟ್ಯ ಸುತ್ತು ನಡೆದಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಡಪಾಯಿ
Next post ಚಾಕಲೇಟ್

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys